Monday, June 18, 2012


  • ದೋಷವನ್ನು ಹುಡುಕುವುದು ಸುಲಭ ಆದರೆ ಅದನ್ನು ಸರಿಪಡಿಸುವುದು ಕಠಿಣ"
  • ಜ್ಞಾನವಂತನಾದ ಮಿತ್ರನು ಜೀವನದ ಬಹುದೊಡ್ಡ ವರದಾನ.
  • ಬೇರೆಯವರನ್ನು ಆಡಿಕೊಂಡು ನೋಡಿ ನಗುವ ಮೊದಲು, ನಿನ್ನನ್ನು ನೀನು ಆಡಿಕೊಂಡು ನಗು.
  • ಸತ್ಯ ಮತ್ತು ನ್ಯಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಮನುಷ್ಯನ ಸಭ್ಯತೆ ಹಾಗೂ ಸಜ್ಜನಿಕೆಯ ಒಂದು ಅಂಗ.
  • ಸಮುದ್ರದಲ್ಲಿ ಸುರಿದ ಮಳೆ, ಹಸಿವಿಲ್ಲದವನಿಗೆ ನೀಡಿದ ಭೋಜನ, ಧನವಂತನಿಗೆ ಕೊಟ್ಟ ದಾನ, ದರಿದ್ರನಿಗೆ ಬಂದ ಯೌವನ ಇವೆಲ್ಲ ವ್ಯರ್ಥವೇ ಸರಿ.
  • ಮನಸ್ಸಿನಲ್ಲಿ ಭಗವಂತನ ಆಲೋಚನೆ, ನುಡಿಯಲ್ಲಿ ಆತನ ಗುಣಗಾನ, ಕ್ರಿಯೆಯಲ್ಲಿ ಪವಿತ್ರ ಕಾಯಕ ಇದೇ ದೈವ ಸಾಕ್ಷಾತ್ಕಾರದ ಮೂಲ.
ಪ್ರೀತಿ ...........


ಹೃದಯದಿ ಮೂಡಿದ ಭಾವನೆಗಳು
ಅವುಗಳೇ ನಿನ್ನಯ ನೆನಪುಗಳು
ನೆನಪಿನ ಪುಟಗಳ ಅಂಚಿನಲಿ
ಮೂಡಿದೆ ಸುಂದರ ಕನಸುಗಳು

ಸಾವಿರ ಕನಸ್ಸಿನ ಹಾಳೆಯಲಿ
ಜಾರಿ ಹೋಗದಿರಲಿ ನಿನ್ನ ಮಾತುಗಳು
ಯಾವ ಮೋಡಿಯಲಿ ನೀ ಸಿಲುಕಿರುವೆಯೋ
ನನ್ನ ಮನಸ್ಸ ನೀ ಮರೆತಿರುವೆ

ಗುಡುಗು ಸಿಡಿಲು ಬಂದರೂ ಸರಿಯೇ
ನಿನ್ನ ನೆನಪು ಅಳಿಯುವುದೇ?
ಲೋಕದ ಸೃಷ್ಟಿಗೆ ದೇವರ ಕೃಪೆಯು
ನನ್ನ ಕವನಕ್ಕೆ ನೀ ಸ್ಪೂರ್ತಿಯು...



                    ......ದಿಲೀಪ್ ಕುಮಾರ್......